Sunday, 11 July 2010

ನಮ್ಮ ಮನೆಯಲ್ಲಿ ಅರಳಿದ ಬ್ರಹ್ಮಕಮಲ






ಅವರಿವರ ಮನೆಯಲ್ಲಿ ಅರಳಿದ ಬ್ರಹ್ಮಕಮಲವನ್ನು ನೋಡಿ ನಾನು ನನ್ನ ಅಮ್ಮ ಒಂದು ಬ್ರಹ್ಮ ಕಮಲದ ಎಲೆಯನ್ನು ತಂದು ಚಿಕ್ಕದೊಂದು ಪಾಟ್ನಲ್ಲಿ ನೆಟ್ಟಿದೆವು.
ಅದು ಮೂರು ನಾಲ್ಕು ವರ್ಶದಿನ್ದ ಬೆಲಿತಾನೆ ಇತ್ತು.ಕೊನೆಗು ಒಂದು ಮೊಗ್ಗು ಬಿಟ್ತು ಅಮ್ಮ ತುಂಬ excite ಆಗಿದ್ಲು.ಅದಿಕ್ಕೆ ಅದನ್ನ ಮಂಗಗಳ ಕ್ಯ್ಗಳಿಂದ ಕಾಪಾಡಲು ಪ್ರತಿ ದಿನ ಅ ಕುಂಡವನ್ನ್ನು ಕೊತಿ ಬಂದಾಗ ಒಳಗೆ ಇಡೋದು, ಮತ್ತೆ ಹೊರಗೆ ಇಡೊದು ಆಗ್ತ ಇತ್ತು.ಆದ್ರೆ ಏನೊ ಅ ಮೊಗ್ಗು ಹೆಚ್ಚು ಬೆಳೆಯುವ ಮೊದಲೆ ಮುದುಡಿ ಹೊಯಿತು, ಅಮ್ಮನ ನಿರಾಸೆ ಬಗ್ಗೆ ಇನ್ನು ಹೆಳೋದೆ ಬೇಡ.

ಅದರೆ phoenix ತರ ಮತ್ತೆ ವಾರದಲ್ಲಿ ಇನ್ನೊಂದು ಮೂಗ್ಗು ಬಿಟ್ಟು ಅಮ್ಮನ ಮುಖದಲ್ಲಿ ಮಂದಹಾಸ ಮೊಡಿತ್ತು.ಈ ಸಾರಿ ಏನು extra care ತೆಗೆದು ಕೊಳ್ಳದೆ ಪ್ರಕೄತಿಯ ಮಡಿಲೆಗೇ ಅದನು ಹಾಕಿದ್ದೆವು.ಪ್ರಕೃತಿ ನಮ್ಮ ಮನೆಯಲ್ಲಿ ಮೊದಲ ಹೊವನ್ನು ಅರಳಿಸಿತ್ತು.ಅಮ್ಮನೆ ಉತ್ಸಾಹಾದಲ್ಲಿ ನಾನು ಮಧ್ಯ ರಾತ್ರಿ ಮನೆಗೆ ಬರುವದರಲ್ಲಿ photo ಸಹ ತೆಗೆದಿದ್ದಳು.ಮತ್ತೆ ನಾನು ಬಂದಾಗ ಅದು ಪೂರ್ತಿಯಾಗಿ ಅರಳಿತ್ತು.
ರಾತ್ರಿ ಅರಳಿ ಮತ್ತೆ ಬೆಳಗ್ಗೆಯ ಹೊತ್ತಿಗೆ ಪ್ರಕೄತಿಯಲ್ಲೇ ಲೀನವಾಗಿ ಹೊಗುವ ಈ ಹೂವು ಅಲ್ಪಾಯುಶಿ.ಅದರೆ ಕೆಲವೇ ಗಂಟೆಗಳಲ್ಲಿ ಇದು ಕೊಡುವ ಆನಂದ ಅಪಾರ.

ಅದರ ಮಾಹಿತಿ ಮತ್ತು ಚಿತ್ರ ಇಲ್ಲಿದೆ:
ಸಸ್ಯ ಶಾಸ್ತ್ರ ಹೆಸರು:Saussurea obvallata

Sunday, 31 January 2010

ಭಾರತ ಮತ್ತು ಗ್ರಾಹಕ ಜಗತ್ತು


ಗಾಂಧೀಜಿಯವರ ತತ್ವಗಳನ್ನು ನಾವು ಪಾಲಿಸದೆ ಇದ್ದರು , ಅವರ ಚಿತ್ರಪಟವನ್ನು ನೇತು ಹಾಕುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ.
ಇಂತಹುದೇ ಒಂದು ಅವರ ಗ್ರಾಹಕ್ರ ಬಗೆಗಿನ ಮಾತು.
"A customer is the most important visitor on our premises.

He is not dependent on us. We are dependent on him.

He is not an interruption in our work – he is the purpose of it.

We are not doing him a favour by serving him. He is doing us a favour by giving us the opportunity to serve him.

- Mahatma Gandhi

ಇನೋಬ್ಬರ ನುಡಿಮುತನ್ನು ಅನುವಾದ ಮಾಡಲು, ಸರಿ ಹೊಂದದೆ ಈ ಮೇಲಿನ ಸಾಲುಗಳನ್ನು ಹಾಗೆಯೆ ಬಿಟ್ಟಿದೇನೆ.
ಗಾಂಧೀಜಿಯವರ ಅಭಿಮಾನಿಯಲ್ಲದಿದ್ದರು, ಸರಿಯಾದ ವಿಚಾರಧಾರೆಯನ್ನು ಗೌರವಿಸುವುದು ತಪ್ಪಲ್ಲ.
ಯಾಕೆ ಹೀಗೆ ಗ್ರಾಹಕ ಹಾಗು ಸೇವಾ ಜಗತ್ತಿನ ಬಗ್ಗೆ ಈ ಧಿಡೀರನೆ ಯೊಚನಾ ಲಹರಿ.....
ನಾನು ಕೆಲವು ಸನ್ನಿವೇಶಗಳಲ್ಲಿ ಗ್ರಾಹಕಿಯಾಗಿ ಅನುಭವವಾದ ಮೇಲೆ ಇದನ್ನು ಬ್ಲಾಗಿನಲ್ಲಿ ಹಾಕಬೇಕೆಂಬ...ಅನಿಸಿಕೆ ಮೂಡಿದ್ದು

ನಗರದ ನೇತ್ರಾಲಯಕ್ಕೆ ಹೋಗಿದಾಗ ಕಾದು ಕಾದು , receptionistನ್ನು ಕೇಳಲು
ಇಷ್ತ ಇದ್ದರೆ ಕಾಯಿರಿ ಇಲ್ಲವಾದಲ್ಲಿ ಹೋಗಿ ಎಂಬ ಉತ್ತರ ಪಡೆಯಬೇಕಾಯಿತು....

ಇನ್ನು ಬಸ್ಸಿನಲ್ಲಿ ವಿದ್ಯಾರಣ್ಯಪುರಕ್ಕೆ ಹೋಗುತ್ತಿರುವಾಗ TATA Institute ಬಳಿ ಹುಡುಗಿಯೊಬ್ಬಳು
ರಾಜಾಜಿನಗರ ಹೊಗುವುದಾ ಎಂದು ಕೇಳಿದ್ದು ನಮ್ಮ driver ಅಣ್ನನಿಗೆ ಬಲು ಕೋಪ ಬಂದು
ಆ ಹುಡುಗಿಗೆ ಬಯ್ಗುಳವಾಯಿತು.ಎರಡನೆ ಸನ್ನಿವೇಶದಲ್ಲಿ ನಾನು ಏನು ಮಾಡಲು ತೋಚಲಿಲ್ಲವದರು, ಮೊದಲನೇ ಪರಿಸ್ಥಿತಿಯಲ್ಲಿ
ನಾನು ವೈದರಿಗೆ ದೊರು ನೀಡಲು ಮಾತ್ರ ಸಾಧ್ಯವಯಿತು.ಇದರಲ್ಲಿ ವೈದ್ಯರು ಯಾವ ಪಾತ್ರ ?ಅವರ receptionist ಹಾಗೆ
ನಡೆದುಕೊಂದಿದ್ದು ಸ್ವ ಇಚ್ಚೆಯಿಂದಲೊ ಅಥವಾ ವೈದ್ಯರ ನಿರ್ದೇಶನದ ಮೆರೆಗೋ ಗೊತ್ತಿಲ್ಲ.ಇದು ಸಾಮನ್ಯವಾಗಿ ನಾನು ಆಸ್ಪತ್ರೆಗಳ್ಲಲ್ಲಿ
ಕಾಣುವ,ನೋಡುವ ಅನುಭವ.ವೈದ್ಯರ ಸಮಯ ಮಾತ್ರವೇ ಮುಖ್ಯವೇ?ರೋಗಿಯ ಸಮಯ ಸಮಯವಲ್ಲವೆ?ಅಥವಾ ವೈದ್ಯರು ಮಾತ್ರ
ಆ privleged communityಯವರೋ ಗೊತ್ತಿಲ್ಲ.ಆದರೆ ಇಂದು ಭಾರತ ಸೇವಾವಲಯದಲ್ಲಿ ಮಾಡುತ್ತಿರುವ ಸಾಧನೆಯಲ್ಲ್ಲಿ ವಿದೇಶಿ
ಗ್ರಾಹಕರಲ್ಲದೆ ನಮ್ಮ ದೇಶಿ ಗ್ರಾಹಕರಿಗೂ ಅಷ್ಟೇ ಮಹತ್ವ ನೀಡಿದರೆ ನಮ್ಮ ಗ್ರಾಹಕ ಸೇವೆ BPO, call center, MNCಗಳಿಗೆ
ಸೀಮಿತವಾಗದೆ...ಪ್ರತಿಯೊಂದು ಪರಿಧಿಯಲ್ಲು ನಾವು ಉತ್ತಮ ಸೇವಾ ವಿತರಕರಾಗುವುದರಲ್ಲಿ ಆಶ್ಚರ್ಯವಿಲ್ಲ.

ಗ್ರಾಹಕ ರೋಗಿಯಾಗಿರಬಹುದು, ಬಸ್ಸಿನಲ್ಲಿ ಒಡಾಡುವ ನಾವು ನೀವಾಗಿರಬಹುದು...ಅಥವಾ ಸಪ್ತ ಸಮುದ್ರದಾಚೆಯಿರುವ ನಮ್ಮ clients ಇರಬಹುದು.ಎಲ್ಲರು ಗ್ರಾಹಕರೇ, ಜಗತ್ತು ಒಂದು ವ್ಯಾಪಾರ ರಂಗವೇ....

Sunday, 10 January 2010

ಮುತ್ತಿನ ಹಾರ


ಹರಿದ ಒಂದು ಮುತ್ತಿನ ಹಾರ
ಓಡೆದ ನೂರು ಮುತುಗಳು
ಹೆಕ್ಕಿ ತೆಗೆಯಲಿ ಯಾವುದ
ಒಂದೊಂದು ಮುತ್ತು ಹೇಳುವುದು
ನೂರು ನೆನಪ ಕಥೆಯನು
ಜಾರಿ ಬಿದ್ದೆ ನಾ ಆ ಕನಸಿನ ಲೋಕದಲ್ಲಿ
ಮರೆತೆ ಒಡೆದ ಮುತುಗಳ ಹೆಕ್ಕಿ ತೆಗೆಯಲು
ಜಾರಿತ್ತ್ತು ಹಾರದ ನೂಲು
ಚೆದುರಿತ್ತು ಒಡೆದ ಮುತ್ತುಗಳು
ಈಗದು ಬರೆ ನೆನಪು
ಮತ್ತೆ ಕಟ್ಟ್ಲಲಾಗದು ಮುತ್ತಿನ ಹಾರ
ಸಮಯ ಮೀರಿದೆ,
ಈಗ ನೆನಪುಗಳೆ ಆಸರೆ ,ಮೌನವೆ ಭಾಷೆಯು
ಕಣ್ಣ ಹನಿಗಳೆ ಮಿಕ್ಕಿದ್ದು.....ಮುತ್ತಾಗಿ
ಬೇಸರದ ನೂಲಿನಲ್ಲಿ ಪೋಣಿಸಲು.....

Sunday, 27 December 2009

ಮರೆಯಾಗದ ಮುಖ

ಕಳೆದು ಹೋದ ವರುಷದಲ್ಲಿ
ನೂರು ಮುಖಗಳ ಪರಿಚಯ.....
ಅವರೆಲ್ಲ ಆಗಲಿಲ್ಲ ಈ ಹೃದಯದಲ್ಲಿ ಸಂಚಯ...


ಕೆಲವು ಮುಖಗಳ ಮತ್ತ್ ಕಾಣಬಾರದೆಂಬ....
ಮತ್ತೆ ಹಲವು ಸ್ಮ್ರಿತಿಯಲ್ಲಿ ಮೂಡಿ ಮರೆಯಾಗಿದೆ....
ಇನ್ನು ಹಲವು ಕಾಣಬೇಕೆಂದರು....
ಕಾಣದ ,ಕಣ್ಣಿನಿಂದ ದೂರವಾದ ಮುಖಗಳು

ಹೀಗೆ ಹಲವರು ದೂರವಾದವರು
ಹೃದಯದಿಂದ ಮರೆಯಾಗಲಾರರು....

ಈ ನಡುವೆ ಒಂದು ಮುಖ ಮತ್ತೆ ಮತ್ತೆ
ಮನದಲ್ಲಿ ಮೂಡಿ ಹೃದಯದಲ್ಲಿ ನಿಂತು ಬಿಟ್ಟಿತು
ಅಳಿಸಿ ಹಾಕುವಂತಹುದಲ್ಲ ಅ ಮೊಗ

ದಿನವು ಕಾಣ ಸಿಗುವಂತಹುದಲ್ಲ
ನೂರು ಚಂದಿರನ ಒಟ್ಟು ಸೇರಿಸಿದಂತೆ
ತಾರೆಗಳು ನಗು ಚೆಲ್ಲಿದಂತೆ....

ಬಣ್ಣಿಸಲು ಬಾರದಂತಹ ಆ ವದನದ
ಬಿಂಬವ ಬಚ್ಹಿಟ್ಟು, ಈ ಕಣ್ಣುಗಳಲ್ಲಿ
ಹೇಳುತಿರುವೆ ವಿದಾಯ ಆ ವರುಷಕೆ...

ವರುಷಗಳರುಳಿದರು ಮರೆಯಾಗದ ಆ ಮುಖದ ನೆನಪಿನಲ್ಲಿ......

Monday, 7 December 2009

ನಿನ್ನ ದನಿ

ನಿನ್ನ ದನಿ ಒಮ್ಮೆ ಕಿವಿಯಲ್ಲಿ ಬಿದ್ದಾಗ
ಉದರದಲ್ಲಿ ನೂರು ಚಿಟ್ಟೆ ಹಾರಿದಂತಾಗಿ.....

ಆ ಭಾವನೆಯ ಎಲ್ಲಿ ಬಿಚ್ಹಿ ಇಡಲಿ....
ಆ ದನಿ ಇನ್ನು ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ....
ಹೃದಯದಲ್ಲಿ ನೂರು ತಂತಿ ಒಮ್ಮೆ ಮೀಟಿ....

ನನ್ನ ಎದೆಯಲ್ಲಿ ನೂರು ವೀಣೆ ಹಾಡಿದಂತೆ...
ಪ್ರತಿಯೊಂದು ಬಡಿತವು ನಿನ್ನ ಹೆಸರನ್ನೆ ಜಪಿಸುತಿದೆ...
ಒಮ್ಮೆ ನಿನಗೆ ಕೇಳಿದರು ಸಾಕು...
ಸಾರ್ಥಕ ಈ ಹೃದಯ ಬಡಿಯುವುದಕ್ಕು....

ಬಣ್ಣಿಸಲು ಸಾಧ್ಯವಿಲ್ಲ ಆ ಭಾವನೆಗಳನ್ನು,
ಬರೆದಿಡಬಹುದೇ ಪ್ರತಿ ಮಿಡಿತವನ್ನು
ಕಣ್ನಿಗೆ ಕಾಣಿಸದ್ದು...ಬಣ್ಣನಗೆ ಮೀರಿದ್ದು
ನೀ ಮಾತ್ರ ತಿಳಿಯಬಲ್ಲೆ......ಅನುದಿನವು ನಿನ್ನ
ನೆನ್ನೆಯುವ ಈ ಜೀವವನ್ನು.....

Sunday, 1 November 2009

ಕನ್ನಡದ ಸಿನಿಮಾ ಸಾಹಿತ್ಯ

ಕನ್ನಡ ಸಾಹಿತ್ಯದ ಚರಿತ್ರೆ ೫ ನೆ ಶತಮಾನದಲ್ಲಿ ಕಾಣಬಹುದಾಗಿದೆ.ಆದಿ ಕವಿ ಪಂಪ, ರನ್ನ, ಕುಮಾರವ್ಯಾಸರಿಂದ
ಹಿಡಿದು ರನ್ನ,ದಾಸ ಸಾಹಿತ್ಯ, ವಚನ ಸಾಹಿತ್ಯ , ನಾಟಕ ,ನವೋದಯ, ನವ್ಯ , ಬಂಡಾಯ ಪರಂಪರೆಯಿಂದ ನಡೆದು ಬಂದಿದೆ.
ಸಾಹಿತ್ಯದ ಪರಿಮಳವನ್ನು , ಕಂಪನ್ನು ಪಸರಿಸುವಲ್ಲಿ ನಮ್ಮ ದೃಶ್ಯ ಮಾಧ್ಯಮವಾದ ಚಲನಚಿತ್ರ, ಆಕಾಶವಾಣಿಗಳು ಮುಖ್ಯ ಪಾತ್ರವಹಿಸುತ್ತವೆ.ಅನಕ್ಷರಸ್ತರು.....ಸಾಹಿತ್ಯದ ಅಭಿರುಚಿ ಇಲ್ಲದವರಿಗೂ ಹಾಡುಗಳು ತಲುಪುವುದು ಈ ಸಿನಿಮಾ ರೇಡಿಯೋಗಳಿಂದ ಮಾತ್ರ.ಹೀಗಿರುವಾಗ ಇಂದಿನ ಚಿತ್ರಗಳಲ್ಲಿ ಉತ್ತಮ ಸಾಹಿತ್ಯದ ಜೊತೆಯಲ್ಲಿ ಅಥವಾ ಅದಕಿಂತ ಹೆಚ್ಚು ವೇಗದಲ್ಲಿ ಅಶ್ಲೀಲ ಸಾಹಿತ್ಯ ಬೆಳೆಯುತ್ತಿದೆ.ಹಲವಾರು ಕವಿಗಳ ಹಲವು ಸುಮಧುರ ಹಾಡುಗಳನ್ನು ಕೇಳಬೇಕು.
ಆದರೆ ಎಲ್ಲಿಯ ಮೂಡಲ ಮನೆಯ ಮುತ್ತಿನ ನೀರಿನ.....ಎಲ್ಲಿಯ ಆತಂಕವಾದಿಗಳ ಹೆಸರಲ್ಲಿನಈಗಿನ ಹಾಡುಗಳು.......
ಇವು ಏನು ಪ್ರತಿಪಾದಿಸುತ್ತಿದೆ?

ನಮ್ಮ ಭಾಷೆಯ ಅಭಿಮಾನ,ಕೇವಲ ಘೋಷಣೆಗಳನ್ನು ಕೂಗುವುದರಲ್ಲಿ ಮಾತ್ರವಲ್ಲ....ನಮ್ಮ ಶ್ರೀಮಂತ ಸಾಹಿತ್ಯವನ್ನು ಕಾಪಾಡಿ....ಉತಮ ಅಭಿರುಚಿಯ ಬೆಳವಣಿಗೆ ಕೂಡ ಮುಖ್ಯ ಎಂದು.....ನನ್ನ ಅಭಿಪ್ರಾಯ.....
ಈ ವಿಚಾರದ ಪ್ರಸ್ತಾಪನೆ ನನ್ನ ಬಹುದಿನದ ಬಯಕೆ.ಕ್ಯಾಬ್ನಲ್ಲಿ ವಿವಿಧ ರೀತಿಯ ಕೀಳುಮಟ್ಟದ ಅಭಿರುಚಿಯ ಅಶ್ಲೀಲ ಸಾಹಿತ್ಯದ ಹಾಡುಗಳು ಇದಕ್ಕೆ ಕಾರಣ.
ನಮ್ಮ ಜೊತೆ ಕೂತಿರುವ ಬೇರೆ ಭಾಷೆಯ ಜನರಿಗೆ ಅರ್ಥವಾಗದ ನಮಗೆ ತಿಳಿಯುವ ಈ ಕೆಟ್ಟ ಹಾಡುಗಳನು ಬದಲಾಯಿಸಲು ಹೇಳುವಾಗ....ಇದು ಕೆಟ್ಟ ಹಾಡು ಎಂದು ನಾವು ಅವರಿಗೆ ನೀಡುವ ವಿವರಣೆ....ಯಾವ ಕನ್ನಡ ಸಾಹಿತ್ಯಾಭಿಮನಿಗು..ಬೇಡ.
ಆಗ ನಮ್ಮ ಈ ಭಾಷೆ ನಮ್ಮ ಅಭಿಮಾನವೆಲ್ಲ ಅವರ ಮುಂದೆ ನಮ್ಮನ್ನು ಕುಬ್ಜವಾಗಿಸುತ್ತದೆ.....
ಸಿನಿಮ ಸಾಹಿತ್ಯ ಕೂಡ ಶ್ರೇಷ್ಠ ಉತ್ತಮ ವಾಗಬೇಕು....ಎಂಬ ಅಭಿಲಾಷೆಯೊಂದಿಗೆ.....ಎಲ್ಲರಿಗೂ....
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
ಇಂಪಾಗು ಆಲಿಸುವ ಕಿವಿಗಳಿಗೆ,
ಕನ್ನಡವೆ ಕಂಪಾಗು ಉಲಿಯುವ ನಾಲಿಗೆಯಲಿ...
ಸೊಂಪಾಗು ನುಡಿಯುವ ಪ್ರತಿ ಬಾಯಲ್ಲಿಯು....
ನಿತ್ಯವು ಅರ್ಚಿತವಾಗು..ಆ ಭಗವಂತನಿಗೆ.....
ತಾಯಿ ಕನ್ನಡಾಂಬೆಗೆ......

Monday, 28 September 2009

ನನಾಸಾಗಲೆಂದು ಬಯಸುವ ಕನಸು

ನಿನ್ನ ಕನಸಿನಿಂದ ನಾ ಬಂದಿದ್ದೆ ದೂರ ಸಾಗಿ....
ಕನಸು ಬರಿ ಕನಸು ಅದು ಚೆನ್ನ ,
ನಿದಿರೆಯಲ್ಲಿ ಕಾಣಲು....ಸವಿ ನಗುವ ಮೂಡಿಸುವುದು
ಅದು ಮರೆಯಗುವುದು ನೋವಿನ ಬುತ್ತಿಯನಿತ್ತು....
ನಿನ್ನ ನೆನಪು ನಿದಿರೆಯನ್ನು ದೂರ ಮಾಡಲು...
ಕನಸು ನಿನ್ನದು ಮಲಗು ಮಲಗೆಂದು ಲಾಲಿ ಹಾಡಿ
ಮತ್ತೆ ನನ್ನನು ನಿನ್ನ ಕನಸ ತೆಕ್ಕೆಗೆ ಸಾಗಿಸಿದೆ
ಮಧುರ ನೆನಪುಗಳ, ಸಿಹಿ ಕನಸುಗಳೀ ಹಾಗೆ
ಕಾಣಲು ಚೆನ್ನ .....ನಿದಿರೆಯಲ್ಲಿ.....
ವಾಸ್ತವದ ಅರಿವಾದಾಗ ನೊವು ಮನದ ತುಂಬ.....
ಹಾಗೆಂದು ಮನ ಕನಸ ಕಾಣುವುದ ಬಿಡುವುದೆ.....
ಗೆಳತಿ....ನಿನಗು ಇರಲಿ ಸವಿ ಗನಸುಗಳ ಬುತ್ತಿ
ಈ ನವರಾತ್ರಿಯ ನವ ನವೀನ ಸ್ಮ್ರಿತಿಯು ನನಪಿಗೆ ಸದಾ
ಬರಲಿ ....ಅವು ನಿಜವಾಗುವುದೆಂಬ ಕನಸು ನಿನ್ನದಾಗಲಿ.........