Monday 28 May 2012

ಕಡಲು-ದೋಣಿ-ಆಂಬಿಗ-ಓಡೆಯ ಹತ್ತಿದ ದೋಣಿ ತೀರ ಸೇರುವುದೆಂಬ ನಂಬಿಕೆಯಲಿ ಹತ್ತಿದೆ ನಿನ್ನ ಜೀವನದ ಹಾಯಿಯ.... ನಂಬಿದೆ ನಿನ್ನ ಅಂಬಿಗನೆ..ತನು ಮನ ಧನದಲಿ ಸರ್ವಸ್ವವು ನಿನ್ನದೆಂಬ ಭ್ರಮೆಯಲಿ ಕಡಲು ಭಯಾನಕವಾದರು ನಿನ್ನ ದೋಣಿಯ ನೆಚ್ಚಿದೆ... ಅಂಬಿಗನ ಕಣ್ಣಿನ ಬೆಳಕಲಿ ಸಾಗರವನ್ನೇ ದಾಟುವೆನೆಂಬ ನಂಬುಗೆಯಲಿ ಚಿಕ್ಕದೊಂದು ಬಿರುಗಾಳಿಗೆ ನಮ್ಮ ನೌಕೆ ಹೀಗೆ ಆಡಿ ಹೋಗುವುದೆಂಬ ಕಲ್ಪನೆಯಿಲ್ಲ ಬಾಳ ಹಾಯಿ ಮಧ್ಯದಲ್ಲಿ ತೊತು ಬೀಳುವುದೆಂದು.... ಹಡಗು ಕಡಲು ಏರಡರ ಒಡೆಯನೊಬ್ಬನಿರುವನು... ಅವನೆ ಬರೆವನು ನಮ್ಮ ಪುಟ್ಟ ದೋಣಿಯ ಹಣೇಬರಹವನ್ನು.. ಯಾರ ನೆಚ್ಚಿ ಹತ್ತಿದೆ ಈ ದೋಣಿಯನ್ನು ಅವನೆ ಕಾಣಿಸುವನು ದೋಣಿಗೊಂದು ತೀರವನ್ನು...

Thursday 12 April 2012

ಅಮ್ಮ



ಹಲವು ತಿಂಗಳುಗಳಿಂದ ಬ್ಲಾಗಿನ ಕಡೆ ಬರಲಿಲ್ಲ.ಜೀವನದ ಕೆಲವು ಹೊಸ ಮಜಲುಗಳು ತೆರೆದು...ಸ್ವಲ್ಪ ಬುಸ್ಯ್ ಅಗಿದ್ದೆ ಅಷ್ಟೆ.
ತಾಯಿಯಾಗುವ ಅನುಭವ ನನ್ನ ಕಣ್ಣನ್ನು ತೆರೆಸಿತು ಅಂದರೆ ತಪ್ಪಿಲ್ಲ.ಹೆಣ್ಣುಮಕ್ಕಳು ತಾವು ಆ ಸ್ಟೇಝ್ ತಲುಪಿದಾಗ ಅದರ ಅರಿವು ಮೂಡುವುದು.
ನನ್ನ ತಾಯಿಯು ಇದೇ ರೀತಿ ಕಷ್ಟ್ಪಟ್ಟಳು ಅನ್ನೋದು ನಮ್ಗೆ ಈಗ ಗೊತ್ತಾಗೊತ್ತೆ.

ಈ ಮೂಲಕ ಏಲ್ಲ ತಾಯಂದಿರಿಗು ನನ್ನ ನಮನ.

ಮನಸ್ವಿನಿ

ಹಲವು ತಿಂಗಳುಗಳಿಂದ ಬ್ಲಾಗಿನ ಕಡೆ ಬರಲಿಲ್ಲ.ಜೀವನದ ಕೆಲವು ಹೊಸ ಮಜಲುಗಳು ತೆರೆದು...ಸ್ವಲ್ಪ ಬುಸ್ಯ್ ಅಗಿದ್ದೆ ಅಷ್ಟೆ.
ತಾಯಿಯಾಗುವ ಅನುಭವ ನನ್ನ ಕಣ್ಣನ್ನು ತೆರೆಸಿತು ಅಂದರೆ ತಪ್ಪಿಲ್ಲ.ಹೆಣ್ಣುಮಕ್ಕಳು ತಾವು ಆ ಸ್ಟೇಝ್ ತಲುಪಿದಾಗ ಅದರ ಅರಿವು ಮೂಡುವುದು.
ನನ್ನ ತಾಯಿಯು ಇದೇ ರೀತಿ ಕಷ್ಟ್ಪಟ್ಟಳು ಅನ್ನೋದು ನಮ್ಗೆ ಈಗ ಗೊತ್ತಾಗೊತ್ತೆ.

ಈ ಮೂಲಕ ಏಲ್ಲ ತಾಯಂದಿರಿಗು ನನ್ನ ನಮನ.

ದೇವರಲ್ಲೊಂದು ವರ

ಏಲ್ಲ ತಾರೆಯರ ಮೀರಿ ನಿನ್ನ ಬೆಳಕು ನನ್ನ ಕಡೆಗೆ ಸದಾ
ಹರಿದು ಬರುವುದು....ಅಮ್ಮ ನಿನ್ನ ಮನದ ಹಲವು ಆಶಯಗಳ
ಕನಸಿನ ಕೂಸಾಗಿ ಬೆಳೆಸಿದೆ ನೀ ಏನ್ನ...

ನಿನ್ನ ಕನಸುಗಳನ್ನು ಹಲವು ಬಾರಿ ಒಡೆದೆ ನಾನು
ಚೂರಾಗಲಿಲ್ಲ ಕಮ್ಮಿ ನನ್ನ ಮೇಲೆ ನಿನ್ನ ಪ್ರೀತಿಯಾ ಜೇನು

ದೇವನೊಮ್ಮೆ ನನ್ನ ಮೇಲೆ ಮುನಿಸಿಕೊಂಡನೇನೊ ಆದರೆ
ನಿನ್ನ ಕೋಪವೆಂದು ಸದಾ ಹುಸಿ ಮುನಿಸಾಗಿಯೆ ಉಳಿದಿತ್ತು

ಏಲ್ಲ ಸಹಿಸಿ,ಪ್ರೀತಿಯ ಸಕ್ಕರೆಯ ಕುಡಿಸಿ ಮತ್ತೆ ನನ್ನ

ಆರಿಗೊ ಬಿಟ್ಟುಕೊಡುವ ಈ ಲೊಕದ ರೊಢಿಯ ತೆಗಳಬೇಕು
ನಿನ್ನ ಮಡಿಲ ಕೊಸಾಗಿಯೆ ಇರಬಾರದೇನು?

ಅನಿಸುತಿದೆ ಹಾಗೊಂದು ವರವ ಬೇಡಬೇಕು ಆ ದೇವರನ್ನು....
ನಾ ಎಂದು ಮಗಳೇ ಆಗಬೇಕು ನನ್ನ ತಾಯಿಗಿನ್ನು.....




ಏಲ್ಲ ತಾರೆಯರ ಮೀರಿ ನಿನ್ನ ಬೆಳಕು ನನ್ನ ಕಡೆಗೆ ಸದಾ
ಹರಿದು ಬರುವುದು....ಅಮ್ಮ ನಿನ್ನ ಮನದ ಹಲವು ಆಶಯಗಳ
ಕನಸಿನ ಕೂಸಾಗಿ ಬೆಳೆಸಿದೆ ನೀ ಏನ್ನ...

ನಿನ್ನ ಕನಸುಗಳನ್ನು ಹಲವು ಬಾರಿ ಒಡೆದೆ ನಾನು
ಚೂರಾಗಲಿಲ್ಲ ಕಮ್ಮಿ ನನ್ನ ಮೇಲೆ ನಿನ್ನ ಪ್ರೀತಿಯಾ ಜೇನು

ದೇವನೊಮ್ಮೆ ನನ್ನ ಮೇಲೆ ಮುನಿಸಿಕೊಂಡನೇನೊ ಆದರೆ
ನಿನ್ನ ಕೋಪವೆಂದು ಸದಾ ಹುಸಿ ಮುನಿಸಾಗಿಯೆ ಉಳಿದಿತ್ತು

ಏಲ್ಲ ಸಹಿಸಿ,ಪ್ರೀತಿಯ ಸಕ್ಕರೆಯ ಕುಡಿಸಿ ಮತ್ತೆ ನನ್ನ

ಆರಿಗೊ ಬಿಟ್ಟುಕೊಡುವ ಈ ಲೊಕದ ರೊಢಿಯ ತೆಗಳಬೇಕು
ನಿನ್ನ ಮಡಿಲ ಕೊಸಾಗಿಯೆ ಇರಬಾರದೇನು?

ಅನಿಸುತಿದೆ ಹಾಗೊಂದು ವರವ ಬೇಡಬೇಕು ಆ ದೇವರನ್ನು....
ನಾ ಎಂದು ಮಗಳೇ ಆಗಬೇಕು ನನ್ನ ತಾಯಿಗಿನ್ನು.....

Friday 22 April 2011


ಹಾಯ್ ಹೆಲ್ಲೊ ಏನು ಹೇಳಬೇಕೆಂದು ಗೊತ್ತಾಗ್ತ ಇಲ್ಲ.ತುಂಬಾ ದಿನಗಳ ನಂತರ ಬ್ಲಾಗನ್ನು ಬರೆಯಲು ಪ್ರಯತ್ನ ಮಾಡುತ್ತಿದ್ದೆನೆ.ಶರಧಿ ಬ್ಲಾಗಿನ ಲೇಖಕಿ ಮದುವೆಯ ನಂತರ ಏಕೆ ಹೆಚ್ಚು ಬರೆಯುತ್ತಿಲ್ಲ ಏಂಬ ಸತ್ಯ ಈಗ ನನಗೂ ಅರಿವೆಗೆ ಬರುತ್ತಿದೆ.ಅನುಭವಕ್ಕಿಂತ ದೊಡ್ದ ಪಾತ ವಿಲ್ಲ ಏಂಬ ಹಿರಿಯರ ಮಾತು ಸತ್ಯ ಅಲ್ವಾ.ಹೊಸ ಜೀವನಕ್ಕೆ ಹೊಂದಿಕ್ಕೊಳ್ಲುವ ಪ್ರಯತ್ನದಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಏಷ್ತು ಯಶಸ್ವಿಯಾಗುತ್ತೆವೆಂಬುದನ್ನು ಸಮಯವೇ ಹೇಳಬೇಕು.

ನಿನ್ನ ನಂಬಿ ಸಪ್ತ ಹೆಜ್ಜೆಇಟ್ಟು ಬಂದೆ ನಲ್ಲ
ಹೆತ್ತು ಹೊತ್ತ ಮಣ್ಣ ಬಿಟ್ಟು,ನನ್ನದೆಲ್ಲವ ತೊರೆದು ನಿನ್ನ
ಒಂದು ಕಿರುಬೆರಳ ಹಿಡಿದು,

ಮುಂದೆ ಬರುವ ಏಲ್ಲ ವಸಂತಗಳು ನಿನ್ನೊಡನೆ,ಶಿಶಿರನ ಮಂಜು ನನ್ನ ದಾಟಿ ನಿನ್ನ್
ಮುಟ್ಟಬೇಕು,
ಬಾನಲ್ಲಿ ನಡೆವ ಏಲ್ಲ ಚಿತ್ತಾರಗಳಿಗೆ ನಾವು ಸಾಕ್ಷಿಯಾಗಬೇಕು

ನಿನ್ನ ಒಳಹೊಕ್ಕು ನನ್ನ ನಾನು ಕಂಡುಕ್ಕೊಳ್ಳಬೇಕು
ನಿನ್ನ ಹೆಜ್ಜೆ ಗುರುತುಗಳಲ್ಲಿ ಕಾಣದಂತೆ ನನ್ನದು ಸೇರಿಕೊಳ್ಳಬೇಕು

ನಿನ್ನ ನೆನಪನ್ನು ಈ ಜಗತ್ತಿನಲ್ಲಿ ಮತ್ತೆ ಮುಂದುವರೆಸಲು,
ನಾವು ನೆಟ್ಟ ಮರವು ಚಿಗೊರೆಡೆದು ಬೆಳೆದು ಹೂವ ಬಿಟ್ಟು
ಕಾಯ ಹೊತ್ತು ಬೀಜ ಬಿತ್ತಿ ಮರವಾಗಬೆಕು....

ನಲ್ಲ ಈ ನಡುವೆ ನಿನ್ನ ಜೊತೆ ಸಾಗಿ ಬರುವ
ನಿನ್ನನೆ ಸುತ್ತಿ ಅಪ್ಪಿರುವ ಈ ಬಳ್ಳಿಯ
ಪುಟ್ಟ ಪುಟ್ಟ ಸ್ವಪ್ನಗಳಿಗೆ ನಿನ್ನ ಹೃದಯದಲ್ಲಿ ಸ್ಠಾನವಿದೆಯೆ?
ಅಶ್ರುಬಿಂದುಗಳಿಗೆ ನಿನ್ನ ಹೆಗಲು ತಲೆದಿಂಬಾಗುವುದೆ?

ಅಲ್ಲವೆ ಮರವ ಸುತ್ತಿ ಬಳಸಿರುವ ನೊರಾರು ಬಳ್ಲಿಗಳಲ್ಲಿ
ಈ ಸಣ್ಣ ಬಳ್ಳಿಯು ಕಾಣದಂತೆ ಹೋಗುವುದೆ.....

Saturday 9 October 2010

ವಿವಾದಗಳ ಕೆಸರಿನ ಸುಳಿಯಲ್ಲಿ ಭಾರತ

ಪ್ರಪಂಚದ ಭೂಪಟದಲ್ಲಿ ಭಾರತ ಇನ್ನು ಬೆಳೆಯುತ್ತಿರುವ ದೇಶ.ನಾವು ಪ್ರಗತಿ ಪಥದಲ್ಲಿ ಇನ್ನು ನಡೆಯುತಲೇ ಇದ್ದೇವೆ, 1947ರಿಂದ.
ನಮ್ಮ ಜನತೆ ಎಲ್ಲ ಕ್ಷೇತ್ರದಲ್ಲಿ ಮುಂದೆ ನುಗ್ಗಿ , ಹೊರಾಡಿ ಗೆಲುವನ್ನು ಸಾಧಿಸುವ ಯತ್ನದಲ್ಲಿ ನಡೆಯುತಿದ್ದಾರೆ.ನಮ್ಮ ದೇಶವನ್ನು ಭೂಪಟದಲ್ಲಿ ಮೆರೆಸಲು
ನಾವು ಏನೆಲ್ಲ ಪಯತ್ನ ಮಾಡುತಿರುವಾಗ, ನಮ್ಮ ರಾಜಕರಣಿಗಳು ದೇಶದ ಮಾನಪಹರಣದ ಯಾವುದೆ ಅವಕಾಶವನ್ನು ಬಿಡುವಂತೆ ಕಾಣುತ್ತಿಲ್ಲ.
commonwealth ಎಂಬ ಅವಕಾಶವನ್ನು ನಮ್ಮ ರಾಜಕಾರಣಿಗಳು ಯಾವ ರೀತಿ ಉಪಯೊಗಿಸಿಕೊಂಡಿದ್ದಾರೆ ಎಂಬುದನ್ನು ಜಗತ್ತಿಗೇ ಗೊತಾಗಿದೆ.
ಒಬ್ಬರ ಮೇಲೆ ಒಬ್ಬರು ಕೆಸರು ಎರಚುವಲ್ಲಿ ನಿರತರಾಗಿದ್ದರೆ ಹೊರತು ನಡೆದಿರುವ ಗೊಂದಲವನ್ನು ಸರಿಪಡಿಸಲು ದೇಶದ ಪ್ರಧಾನಿ, ಅದು ಮಾಧ್ಯಮಗಳ ಹಾರಾಟ, ಹೊರಾಟದ ನಂತರ ತಲೆ ತೂರಿಸುವಂತಾಗಿದ್ದು ವಿಷಾದದ ಸಂಗತಿ.ದಕ್ಶಿಣ ಆಫ್ರಿಕಾದಂತಹ ದೇಶದಿಂದ ನಾವು ಬುದ್ಧಿವಾದ ಹೇಳಿಸುಕೊಳ್ಳುವ ಹಾಗೆ ಆಯಿತು.ಮಾಧ್ಯಮಗಳು ದಿಲ್ಲಿ ಬದ್ನಾಮ್ ಹುಯಿ ಕಾಮನ್ವೆಲ್ಥ್ ತೆರೆ ಲಿಯೆ ಎಂದು ಹಾಡಿ ಕುಣಿದವು.ಮಾನ್ಯ ಕಲ್ಮಾಡಿ ಸಾಹೇಬರು ನಮ್ಮ ಮಾಜಿ ರಾಷ್ತ್ರಪತಿಗಳನ್ನು ಬಿಡದೆ,ಸತ್ತ ರಾಜಕುಮಾರಿಯನ್ನ್ನೂಜೀವಂತಗೊಳಿಸಿದ ಧೀಮಂತ ವ್ಯಕ್ತಿ.

ಪಾಪ ಈಗ ಗಾಂಧೀ ತಾನು ಈ ಕರ್ಮ ಕಾಂಡ ನೊಡೋದರ ಬದಲು ಆಗ ಪ್ರಾಣ ಬಿಟ್ಟಿದ್ದೆ ಒಳ್ಳೇದು ಅಂತಾ ಅಂದುಕೊಳ್ತಾ ಇದ್ರು......

ಈ ರಾಜಕಾರಣಿಗಳು,ಮಾಧ್ಯಮಗಳು,ನಾವು.....ಇವರಲ್ಲಿ ಯಾರು ಸತ್ಪ್ರಜೆಗಳು?

ಹೇಗೊ ಈ ವಿವಾದಗಳ ನಡುವೆ ಭಾರತ ಈ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದರೆ ಅದು ಕೆಸರಿನಲ್ಲಿ ಕಮಲದಂತೆ.......ಸಮಾಧಾನದ ಸಂಗತಿಯಗುತ್ತದೆ.........

Sunday 11 July 2010

ನಮ್ಮ ಮನೆಯಲ್ಲಿ ಅರಳಿದ ಬ್ರಹ್ಮಕಮಲ






ಅವರಿವರ ಮನೆಯಲ್ಲಿ ಅರಳಿದ ಬ್ರಹ್ಮಕಮಲವನ್ನು ನೋಡಿ ನಾನು ನನ್ನ ಅಮ್ಮ ಒಂದು ಬ್ರಹ್ಮ ಕಮಲದ ಎಲೆಯನ್ನು ತಂದು ಚಿಕ್ಕದೊಂದು ಪಾಟ್ನಲ್ಲಿ ನೆಟ್ಟಿದೆವು.
ಅದು ಮೂರು ನಾಲ್ಕು ವರ್ಶದಿನ್ದ ಬೆಲಿತಾನೆ ಇತ್ತು.ಕೊನೆಗು ಒಂದು ಮೊಗ್ಗು ಬಿಟ್ತು ಅಮ್ಮ ತುಂಬ excite ಆಗಿದ್ಲು.ಅದಿಕ್ಕೆ ಅದನ್ನ ಮಂಗಗಳ ಕ್ಯ್ಗಳಿಂದ ಕಾಪಾಡಲು ಪ್ರತಿ ದಿನ ಅ ಕುಂಡವನ್ನ್ನು ಕೊತಿ ಬಂದಾಗ ಒಳಗೆ ಇಡೋದು, ಮತ್ತೆ ಹೊರಗೆ ಇಡೊದು ಆಗ್ತ ಇತ್ತು.ಆದ್ರೆ ಏನೊ ಅ ಮೊಗ್ಗು ಹೆಚ್ಚು ಬೆಳೆಯುವ ಮೊದಲೆ ಮುದುಡಿ ಹೊಯಿತು, ಅಮ್ಮನ ನಿರಾಸೆ ಬಗ್ಗೆ ಇನ್ನು ಹೆಳೋದೆ ಬೇಡ.

ಅದರೆ phoenix ತರ ಮತ್ತೆ ವಾರದಲ್ಲಿ ಇನ್ನೊಂದು ಮೂಗ್ಗು ಬಿಟ್ಟು ಅಮ್ಮನ ಮುಖದಲ್ಲಿ ಮಂದಹಾಸ ಮೊಡಿತ್ತು.ಈ ಸಾರಿ ಏನು extra care ತೆಗೆದು ಕೊಳ್ಳದೆ ಪ್ರಕೄತಿಯ ಮಡಿಲೆಗೇ ಅದನು ಹಾಕಿದ್ದೆವು.ಪ್ರಕೃತಿ ನಮ್ಮ ಮನೆಯಲ್ಲಿ ಮೊದಲ ಹೊವನ್ನು ಅರಳಿಸಿತ್ತು.ಅಮ್ಮನೆ ಉತ್ಸಾಹಾದಲ್ಲಿ ನಾನು ಮಧ್ಯ ರಾತ್ರಿ ಮನೆಗೆ ಬರುವದರಲ್ಲಿ photo ಸಹ ತೆಗೆದಿದ್ದಳು.ಮತ್ತೆ ನಾನು ಬಂದಾಗ ಅದು ಪೂರ್ತಿಯಾಗಿ ಅರಳಿತ್ತು.
ರಾತ್ರಿ ಅರಳಿ ಮತ್ತೆ ಬೆಳಗ್ಗೆಯ ಹೊತ್ತಿಗೆ ಪ್ರಕೄತಿಯಲ್ಲೇ ಲೀನವಾಗಿ ಹೊಗುವ ಈ ಹೂವು ಅಲ್ಪಾಯುಶಿ.ಅದರೆ ಕೆಲವೇ ಗಂಟೆಗಳಲ್ಲಿ ಇದು ಕೊಡುವ ಆನಂದ ಅಪಾರ.

ಅದರ ಮಾಹಿತಿ ಮತ್ತು ಚಿತ್ರ ಇಲ್ಲಿದೆ:
ಸಸ್ಯ ಶಾಸ್ತ್ರ ಹೆಸರು:Saussurea obvallata

Sunday 31 January 2010

ಭಾರತ ಮತ್ತು ಗ್ರಾಹಕ ಜಗತ್ತು


ಗಾಂಧೀಜಿಯವರ ತತ್ವಗಳನ್ನು ನಾವು ಪಾಲಿಸದೆ ಇದ್ದರು , ಅವರ ಚಿತ್ರಪಟವನ್ನು ನೇತು ಹಾಕುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ.
ಇಂತಹುದೇ ಒಂದು ಅವರ ಗ್ರಾಹಕ್ರ ಬಗೆಗಿನ ಮಾತು.
"A customer is the most important visitor on our premises.

He is not dependent on us. We are dependent on him.

He is not an interruption in our work – he is the purpose of it.

We are not doing him a favour by serving him. He is doing us a favour by giving us the opportunity to serve him.

- Mahatma Gandhi

ಇನೋಬ್ಬರ ನುಡಿಮುತನ್ನು ಅನುವಾದ ಮಾಡಲು, ಸರಿ ಹೊಂದದೆ ಈ ಮೇಲಿನ ಸಾಲುಗಳನ್ನು ಹಾಗೆಯೆ ಬಿಟ್ಟಿದೇನೆ.
ಗಾಂಧೀಜಿಯವರ ಅಭಿಮಾನಿಯಲ್ಲದಿದ್ದರು, ಸರಿಯಾದ ವಿಚಾರಧಾರೆಯನ್ನು ಗೌರವಿಸುವುದು ತಪ್ಪಲ್ಲ.
ಯಾಕೆ ಹೀಗೆ ಗ್ರಾಹಕ ಹಾಗು ಸೇವಾ ಜಗತ್ತಿನ ಬಗ್ಗೆ ಈ ಧಿಡೀರನೆ ಯೊಚನಾ ಲಹರಿ.....
ನಾನು ಕೆಲವು ಸನ್ನಿವೇಶಗಳಲ್ಲಿ ಗ್ರಾಹಕಿಯಾಗಿ ಅನುಭವವಾದ ಮೇಲೆ ಇದನ್ನು ಬ್ಲಾಗಿನಲ್ಲಿ ಹಾಕಬೇಕೆಂಬ...ಅನಿಸಿಕೆ ಮೂಡಿದ್ದು

ನಗರದ ನೇತ್ರಾಲಯಕ್ಕೆ ಹೋಗಿದಾಗ ಕಾದು ಕಾದು , receptionistನ್ನು ಕೇಳಲು
ಇಷ್ತ ಇದ್ದರೆ ಕಾಯಿರಿ ಇಲ್ಲವಾದಲ್ಲಿ ಹೋಗಿ ಎಂಬ ಉತ್ತರ ಪಡೆಯಬೇಕಾಯಿತು....

ಇನ್ನು ಬಸ್ಸಿನಲ್ಲಿ ವಿದ್ಯಾರಣ್ಯಪುರಕ್ಕೆ ಹೋಗುತ್ತಿರುವಾಗ TATA Institute ಬಳಿ ಹುಡುಗಿಯೊಬ್ಬಳು
ರಾಜಾಜಿನಗರ ಹೊಗುವುದಾ ಎಂದು ಕೇಳಿದ್ದು ನಮ್ಮ driver ಅಣ್ನನಿಗೆ ಬಲು ಕೋಪ ಬಂದು
ಆ ಹುಡುಗಿಗೆ ಬಯ್ಗುಳವಾಯಿತು.ಎರಡನೆ ಸನ್ನಿವೇಶದಲ್ಲಿ ನಾನು ಏನು ಮಾಡಲು ತೋಚಲಿಲ್ಲವದರು, ಮೊದಲನೇ ಪರಿಸ್ಥಿತಿಯಲ್ಲಿ
ನಾನು ವೈದರಿಗೆ ದೊರು ನೀಡಲು ಮಾತ್ರ ಸಾಧ್ಯವಯಿತು.ಇದರಲ್ಲಿ ವೈದ್ಯರು ಯಾವ ಪಾತ್ರ ?ಅವರ receptionist ಹಾಗೆ
ನಡೆದುಕೊಂದಿದ್ದು ಸ್ವ ಇಚ್ಚೆಯಿಂದಲೊ ಅಥವಾ ವೈದ್ಯರ ನಿರ್ದೇಶನದ ಮೆರೆಗೋ ಗೊತ್ತಿಲ್ಲ.ಇದು ಸಾಮನ್ಯವಾಗಿ ನಾನು ಆಸ್ಪತ್ರೆಗಳ್ಲಲ್ಲಿ
ಕಾಣುವ,ನೋಡುವ ಅನುಭವ.ವೈದ್ಯರ ಸಮಯ ಮಾತ್ರವೇ ಮುಖ್ಯವೇ?ರೋಗಿಯ ಸಮಯ ಸಮಯವಲ್ಲವೆ?ಅಥವಾ ವೈದ್ಯರು ಮಾತ್ರ
ಆ privleged communityಯವರೋ ಗೊತ್ತಿಲ್ಲ.ಆದರೆ ಇಂದು ಭಾರತ ಸೇವಾವಲಯದಲ್ಲಿ ಮಾಡುತ್ತಿರುವ ಸಾಧನೆಯಲ್ಲ್ಲಿ ವಿದೇಶಿ
ಗ್ರಾಹಕರಲ್ಲದೆ ನಮ್ಮ ದೇಶಿ ಗ್ರಾಹಕರಿಗೂ ಅಷ್ಟೇ ಮಹತ್ವ ನೀಡಿದರೆ ನಮ್ಮ ಗ್ರಾಹಕ ಸೇವೆ BPO, call center, MNCಗಳಿಗೆ
ಸೀಮಿತವಾಗದೆ...ಪ್ರತಿಯೊಂದು ಪರಿಧಿಯಲ್ಲು ನಾವು ಉತ್ತಮ ಸೇವಾ ವಿತರಕರಾಗುವುದರಲ್ಲಿ ಆಶ್ಚರ್ಯವಿಲ್ಲ.

ಗ್ರಾಹಕ ರೋಗಿಯಾಗಿರಬಹುದು, ಬಸ್ಸಿನಲ್ಲಿ ಒಡಾಡುವ ನಾವು ನೀವಾಗಿರಬಹುದು...ಅಥವಾ ಸಪ್ತ ಸಮುದ್ರದಾಚೆಯಿರುವ ನಮ್ಮ clients ಇರಬಹುದು.ಎಲ್ಲರು ಗ್ರಾಹಕರೇ, ಜಗತ್ತು ಒಂದು ವ್ಯಾಪಾರ ರಂಗವೇ....