Tuesday 9 December 2008

ಪರೀಕ್ಷೆಗೆ ಓದೋದ್ರಲ್ಲಿ ....ಬಾಂಬ್ ಬ್ಲಾಸ್ಟ್ ಗಲಾಟೆನಲ್ಲಿ ಯಾಕೋ ಬ್ಲಾಗ್ ಬರೀಲ್ಲಿಕ್ಕೆ ಆಗ್ಲಿಲ್ಲ.....
ಮನಸ್ಸು ಮೌನಕ್ಕೆ ಶರಣಾಗಿ ಬಿಡ್ತು.....
ಹಾಗೆ ಒಮ್ಮೆ ಅಲ್ಲ.....ತುಂಬ ಸರ್ತಿ ನಂಗೆ ಮೌನ ನೇ ಮೇಲು ಅನಿಸೋದು ಹೆಚ್ಚು........
ಹಾಗೆ ನೀವು ಎಂದಾದರು ಯಾರದಾದರು ಕಣ್ಣಲ್ಲಿ ಇಣುಕಿ ನೋಡಿದು....ಉಂಟ...?
ಅಲ್ಲಿ ಮೌನ ಮನೆ ಮಾಡಿದೆಯೋ.....ನೋವುಡುಗಟ್ಟಿದೆಯೋ......... ಅಂತ...
ಹಾಗೆ ಒಮ್ಮೆ ನೋಡಿದ್ರೆ ಅ ಅವರಿಗೆ ಎಷ್ಟು ಖುಷಿ ....ಆಗುತ್ತೆ ಗೊತ್ತ.....ನೋಡ ಬೇಕು ಅಷ್ಟೆ....
ಪ್ರತಿಕ್ರಿಯೆ ಮಾತ್ರ.....ಅದನ್ನ ತೋರಿಸಬಾರದು......ತೋರಿಸಲೂ.....ಬಹುದು ನಿಮ್ಮ ಆಯ್ಕೆ....
ಕಣ್ಣ ಕಡಲು.....
ಒಮ್ಮೆ ನನ್ನ ಕಣ್ಣುಗಳಲ್ಲಿ ಇಣುಕಿ ನೋಡು ಗೆಳೆಯ.....
ಅಲ್ಲೆಷ್ಟು.... ನೋವಿದೆ.....ನಿನ್ನ ಪ್ರತಿ ಎಷ್ಟು ಪ್ರೀತಿ ಇದೆ.....
ಬದುಕಿನ ಮೇಲೆಷ್ಟು ಆಸೆ ಯಿದೆ........
ನೀ.. ಒಮ್ಮೆ ಹಾಗೆ ಈ ಕಣ್ಣ ಕಡಲಲ್ಲಿ...
ಇಳಿದು....ನೋಡು ಅಲ್ಲೆಷ್ಟು.... ....ಪ್ರೀತಿಯ ಮುತ್ತು ಗಳಿವೆ....
ಅಭಿಮಾನದ ಗುರುತುಗಳಿವೆ.....
ಉತ್ಸಾಹದ....ಚಿಲುಮೆ ಇದೆ.....
ಈ ಕಣ್ಣ ನೀ .... ಕಾಣದೆ.....ಬೇರೆಲ್ಲೋ ಹುಡುಕಿ....
ಅಲೆಯಬೇಡ.....ಗೆಳೆಯ....ಒಮ್ಮೆ ...ಈ ಕಣ್ಣ ನೀ ಕಂಡರೆ ಸಾಕು....
ಆ ಸುಖ ದಲ್ಲೇ ಕಣ್ಮುಚ್ಚಿ ಬಿಡುವೆ ನಾನು......
ಆ ಕಣ್ಣು ಗಳಿಗೆ ಈ ಕವನದ ಅರ್ಪಣೆ.....

Sunday 9 November 2008

ಹರೆಯದ ಭಾವನೆಗಳು ನೆನೆದರೆ ........
ಆ ದಿನಗಳು, ಆಗ ಮನಸ್ಸು ಹರಿದ ರೀತಿ......
ಮುಚ್ಚು ಮರೆ ಇತ್ತು, ನಾಚಿಕೆ ಸಂಕೂಚಗಳು ತುಂಬಿ ಪ್ರಪಂಚವೆಲ್ಲ ಹಸಿರಾಗಿ ಕಂಗೊಳಿಸುತಿತ್ತು.....
ಯಾರಿಗಾಗೋ ಕಾಯುವ ತವಕ ಮನಸ್ಸಿಗೆ, ರಂಗು ರಂಗಿನ ಕನಸು ಮನಸಿನ ತುಂಬ.....ಆ ಅವನ ಕಲ್ಪನೆ....
ಅದು ನಿಜವಾಗಲು ಹುಚ್ಚು ಕೋಡಿ ಮನಸೇ ಸರಿ.ಆ ದಿನಗಳ ನೆನಪಿನಲ್ಲಿ ಈ ಕವನ ಆ ಹರೆಯದ ಮನಸ್ಸುಗಳಿಗಾಗಿ ಆರ್ಪಣೆ.

ಬರುವೆ ಯಾವಾಗ ಗೆಳೆಯ?
ತಿಂಗಳು ತುಂಬಿ, ಚಂದಿರನ ನಂಬಿ
ಬಾನಲ್ಲಿ ಮೂಡಿತು ತಾರೆಗಳ ಮದರಂಗಿ
ಶಶಿಕಾಂತನ ಸನಿಹ ಬಯಸಿ ಕಾದಿತ್ತು
ಸಹಸ್ರ ಸಹಸ್ರ ತಾರೆಗಳ ದಂಡಿತ್ತು
ನನಗೆ ನಿನ್ನದೇ ನೆನಪಾಗ, ನೀ ಎನ್ನ
ಬಾಳಿನ ಶಶಿಕಾಂತನಾಗಿ ಬರುವೆ ಯಾವಾಗ
ಹುಣ್ಣ್ಣಿಮೆಯ ಹಾಲ್ ಬೆಳಕು ಬಾನಿಗೆ ಚೆಲ್ಲಿದಂತೆ
ಬಂದೆನ್ನ ಬಾಳಿಗೆ ಬೆಳಕಾಗುವುದು ಯಾವಗ?
ಕಾದಿಹೆನು ನಾನು ಆ ದಿನಕ್ಕಾಗಿ,
ನ್ನಿನೂಡನೆ ಕೂತು ಸವಿಯಲು
ಹುಣ್ಣ್ಣಿಮೆಯ ಹೋಳಿಗೆಯನ್ನು
ಬರುವುದು ನೀ ಯಾವಾಗ , ಗೆಳೆಯ ಯವಾಗ?
ಬಾಳ ಪಯಣದಲ್ಲಿ ನಾವಿಬ್ಬರು ಜೊತೆಯಾಗಿ
ಹುಣ್ಣ್ಣಿಮೆ ಅಮಾವಾಸ್ಯೆಗಳ ದಾಟಿ ಎಂದೆಂದು,
ನನ್ನ ಬಾಳಿಗೆ ನೀ ಬರುವೆ ಯಾವಗ?
ಅಳಿವಿಲ್ಲದ ಪುನ್ನಮಿಯ ಚಂದಿರನಾಗಿ.

Monday 27 October 2008

ಮನದಾಳದಿಂದ

ಮತ್ತೆ ದೀಪಾವಳಿ ಬಂದಿದೆ, ಬೆಲೆಏರಿಕೆಯಾ ಕಾಲದಲ್ಲಿ ಹಬ್ಬ ಹೇಗಪ್ಪಮಾಡೋದು ಅಂತ ಕೆಲವರಿಗೆ ಯೋಚನೆ ಆದ್ರೆ ಇನ್ ಕೆಲವರಿಗೆ ಎಷ್ಟು ಚಿನ್ನ ತೊಗೊಳ್ಳೋದು ಈ ಸಾರಿ ಅಂತ ಚಿಂತೆ ಹೀಗೆ ಅವರವರಿಗೆ ಅವರದೇ ಆದ ಚಿಂತೆ.........
ಆದ್ರೆ ಬೆಲೆ ಬಗ್ಗೆ ಚಿಂತೆ ಮಾಡ್ತಾ ಮಾಡ್ತಾ ನಾವು ಇನ್ನು ಹೆಚ್ಚು ಖರ್ಚು ಮಾಡ್ತಾ ಇದ್ದಿವೇನೋ ಅನ್ಕೊಂತೀನಿ
ಹಾಗೇನೇ, ಆ ದೀಪ ದ ಬೆಳಕು..ಪಟಾಕಿ ಸಂಭ್ರಮ ಎಲ್ಲಾನು ಮರೀತಾಇದ್ದಿವಿ....
ಸ್ನೇಹಿತೆ ಹೀಗೆ ಯಾರದೋ ಮನೆ ಮುಂದೆ ಹೊಡೆದು ಬಿಟ್ಟಿರೋ ಪಟಾಕಿ ಕಸ ತಂದು ಅವರ ಮನೆ ಮುಂದೆ ಹಾಕಿ
ತಾವೇ ಅಷ್ಟೂ ಹೊಡೆದ್ದಿದು ಅಂತ ಜಂಬ ಮಾಡ್ತಾ ಇದರಂತೆ......

ಅದೇ dhaatiyalli ಈ ಕವಿತೆ .......

ಬೆಳಕು
ಚಂದ್ರ ನಿನ್ನ ಬೆಳಕನ್ನು ಮುಚ್ಚಿ ಬೆಳಗಿದೆ
ಹಣತೆಯ ಪ್ರಭೆ ಪಸರಿಸಿದೆ ಊರೆಲ್ಲ
ಕತ್ತಲು ಕವಿದ ಈ ಭುವಿಗೆ ಇನ್ನೊಂದು
ಆಶಾಕಿರಣ ........
ಹಾ ಹಾ ನೀ ಹೀಗೆ ಅಸೂಯೆಪಡಬೇಡ ಶಶಾಂಕ...
ದಿಗಿಲು ಬೇಡ ನನ್ನ ಚಂದ್ರಮ ಇದೆಲ್ಲ ಕೇವಲ ರಾಮ, ಬಲಿಯರ
ಲಕ್ಷ್ಮಿ ದೇವಿಯರ ಸ್ವಾಗತಕ್ಕೆ ಮಾತ್ರ...........
ದೀಪಾವಳಿಯ ೩ ದಿನಗಳಿಗೆ ಮಾತ್ರ........
ನೀನೆ ಎಂದು ನಮ್ಮೆಲ್ಲರ ಬಾಳಿಗೆ ನಿರಂತರ ದೀವಿಗೆ.......
ಈ ಸತ್ಯ , ಪ್ರಕೃತಿ ನಿನಗೆ ನೀಡಿದ ವರ ಮಾತ್ರ
ಹಾಗೆಂದು ನೀ ಕೂಡ ಹಿಗ್ಗ ಬೇಡ
ಇನ್ನೊಂದು ಸತ್ಯ ವ ಮೊದಲು ನೀ ಅರಿಯಲೇಬೇಕು.....ನೀ
ಕೂಡ ಕಣ್ಮರೆ ಯಾಗುವೆ ಗ್ರಹಣದ ದಿನದಂದು....
ಅದ್ದರಿಂದ ಚಂದ್ರ, ಸೂರ್ಯ , ಹಣತೆ ಎಲ್ಲ ವೂ
ಪಂಜು , ಲಾತಿನು , ವಿದ್ಯುತ್ ದೀಪ
ಎಲ್ಲ ಆ ದೇವನ ವಿಧ ವಿಧದ ಬೆಳಕಿನ ಪ್ರತಿರೂಪಗಳು......
ಬಾ ಈ ದೀಪಾವಳಿಗೆ, ದೀಪ ದ ಹಲವು ಪ್ರತಿರೂಪದ ಆ ಮಂಗಳ ಮೂರುತಿಗೆ
ಬಾಗಿ ನಮಿಸಿ ಕರ ಜೋಡಿಸಿ ನಮಿಸುವ.........

ದೀಪಾವಳಿಯ ಹಾರ್ದಿಕ ಶುಭಾಶಯಗಳು......
















Sunday 19 October 2008

ಪ್ರಥಮ ಬ್ಲಾಗ್ ಪೋಸ್ಟಿಂಗ್ , ಸ್ವಲ್ಪ ಹಾಗೆ ಹೀಗೆ ಇದ್ರೆ ಅಡ್ಜಸ್ಟ್ maadkoli ಅಂತ ಸಣ್ಣ request.
ತುಂಬಾ ದಿನಗಳಿಂದ ಕವನ ರಚಿಸುವ .....ಹವ್ಯಾಸ ಇದೆ ಆದ್ರೆ SHARE ಮಾಡೇ ಇಲ್ಲ.....
ಇಲ್ಲೊಂದು ಪ್ರಸ್ತುತ ಇದೆ.......
ಪಯಣ

ಬಾಳ ಹಾದಿ ಹೀಗೆ,
ನದೆವ ದಾರಿಯೆಲ್ಲ ಹೂವಲ್ಲ,
ಅದರೆ ನಡೆವುದು ನಿಲ್ಲ್ಲಲ್ಲ
ಹೂವನ್ನು ಅರಸಿ ...ಮುಳ್ಳಿನ ಹಾದಿ ಕ್ರಮಿಸಿ
ಕೊನೆಗೊಂದು ದಿನ ಕಂಡೆ ಪಾರಿಜಾತ ವನವನ್ನು.....
ಆದರೇನು.....ಪಾರಿಜಾತದ ಪಯಣ ಕೂಡ ಒಂದೇ ದಿನ........
too difficult to ಟೈಪ್
in ಕನ್ನಡ....hope i will learn soon.....
ಸೂಚನೆಗಳೂ ಸ್ವಾಗತಾರ್ಹ...........